https://koodanda.blogspot.com

ಭಾನುವಾರ, ನವೆಂಬರ್ 29, 2015

ಕಾವೇರಿ ನದಿ ಸ್ವಚ್ಚತಾ ಆಂದೋಲನ


 ಕಾವೇರಿ ನದಿಯು ನಿರಂತರವಾಗಿ ಕಲುಷಿತವಾಗುತ್ತಿದೆ. ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿದ ಕೊಪ್ಪದ ನಿವಾಸಿ ಚಂದ್ರಮೋಹನ್ ಎಂ.ಎನ್. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಕೈಗೊಂಡಿದ್ದಾರೆ. ಈ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಆಂದೋಲನದ ಉದ್ದೇಶ
ಕಾವೇರಿ ನದಿ ಕಲುಷಿತತೆಯನ್ನು ತಪ್ಪಿಸುವುದು, ನದಿಯ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು, ಸಂಘಸಂಸ್ಥೆಗಳು, ಸರಕಾರ, ಸ್ಥಳೀಯ ಆಡಳಿತಗಳ ಸಹಯೋಗದೊಂದಿಗೆ ನದಿ ತಟಗಳಲ್ಲಿ  ವೈವಿಧ್ಯಮಯ ಕಾರ್ಯಕ್ರಮಗಳನ್ನು  ರೂಪಿಸುವುದು, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರದ ಬಳಿ ನಿಯೋಗದೊಂದಿಗೆ ತೆರಳಿ ಮೂಲ ಕಾವೇರಿ ಸೇರಿದಂತೆ ಕೊಡಗು ಜಿಲ್ಲೆಯ ನದಿ ತಟಗಳ ಸಮಸ್ಯೆಯ ಬಗ್ಗೆ ದಾಖಲೆ ಸಹಿತ ಮಾಹಿತಿ ಒದಗಿಸುವುದು.  ಜೊತೆಗೆ ಅಂದಾಜು 850 ಕಿಮೀ ಉದ್ದದ ಕಾವೇರಿ ನದಿಯ ತಟಗಳಲ್ಲಿ  ನದಿಯ ಕಲುಷಿತತೆಗೆ ಕಾರಣವಾಗಿರುವ ಕಾಖರ್ಾನೆ, ಅಕ್ರಮ ಮರಳು ದಂಧೆ, ಹೋಟೆಲ್, ರೆಸಾಟರ್್, ಹೋಂಸ್ಟೇ ಇತ್ಯಾದಿಗಳಿಂದ ತ್ಯಾಜ್ಯ ನೇರವಾಗಿ ಸೇರದಂತೆ ಸರಕಾರದ ಮೂಲಕ ಕಾಯ್ದೆ ರೂಪಿಸುವಂತೆ ಒತ್ತಾಯಿಸುವುದು. ಹಾಗೂ ಆ ಕಾಯ್ದೆಯ ಅನುಷ್ಠಾನಕ್ಕೆ ತರುವಂತೆ  ಕೇಂದ್ರ ಮತ್ತು  ನದಿ ಹರಿಯುವ ರಾಜ್ಯ ಸರಕಾರಗಳಿಗೆ ವಿಭಿನ್ನ ರೀತಿಯಲ್ಲಿ ಒತ್ತಾಯ ಹೇರುವುದು. ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾದ ಮಡಿಕೇರಿ ಪಟ್ಟಣಕ್ಕೆ ಕಾವೇರಿ ಕುಡಿವ ನೀರು ಯೋಜನೆಗೆ ಸರಕಾರದ ಮೂಲಕ ಆಗ್ರಹಿಸುವುದು. ಗಂಗಾ ನದಿ ಮಾದರಿಯಂತೆ ಕಾವೇರಿ ನದಿಗೆ ಖಾಸಗಿ ಸಹಭಾಗಿತ್ವದೊಂದಿಗೆ ಹಲವು ಯೋಜನೆಗಳನ್ನು ರೂಪಿಸುವುದು.  ಕಾವೇರಿ ನದಿ ನೀರು ಬಳಕೆ ಮಾಡುವ ಬೃಹತ್ ಪಟ್ಟಣಗಳ ಜನರಿಂದ ನದಿ ಶುದ್ಧೀಕರಣ ನಿಧಿ ಸ್ಥಾಪಿಸುವುದು.  ನದಿ ತಟಗಳ ಅಭಿವೃದ್ಧಿಗೆ ಸರಕಾರದ ಮೂಲಕ ಒತ್ತಾಯಿಸುವುದು ಸೇರಿದಂತೆ ಇಂತಹ ಹಲವು ಉದ್ದೇಶಗಳನ್ನು ಹೊಂದಿದೆ.

5 ವರ್ಷಗಳಿಂದ ಕಾರ್ಯ ನಿರ್ವಹಣೆ.

ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆಯ ಸಾಧುಸಂತರ  ಮಾರ್ಗದರ್ಶನದಂತೆ ನದಿ ಸ್ವಚ್ಚತೆ ಅಭಿಯಾನಕ್ಕೆ 2011 ರಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು. 

ಕೊಡಗು ಜಿಲ್ಲೆಯ ತಲಕಾವೇರಿಯಿಂದ ತಮಿಳುನಾಡು ಪೂಂಪ್ಹರ್ ಬಳಿ ಕಾವೇರಿ ನದಿ ಬಂಗಾಳಕೊಲ್ಲಿ ಸೇರುವತನಕ 2014ರಲ್ಲಿ ನದಿ ತಟಗಳ ಸವರ್ೆ ಕಾರ್ಯ ನಡೆದಿದೆ. ಶಾಲಾ ಮಕ್ಕಳ ಮೂಲಕ ನದಿ ಸ್ವಚ್ಚತಾ ಅಭಿಯಾನಕ್ಕೆ ಕಾರ್ಯಕ್ರಮಗಳು-ಒಟ್ಟಾರೆ ಕಾವೇರಿ ನದಿ ತಟಕ್ಕೆ ಬಾಟಲ್ ನೀರು ತಪ್ಪಿಸಿ ನದಿ ನೀರನ್ನು ನೇರವಾಗಿ ಬಳಸಲು ಅವಕಾಶವಾಗುವಂತೆ ನದಿ ತಟಗಳ ನಿಮರ್ಾಣ ಮಾಡುವುದು.



ಕಾಮೆಂಟ್‌ಗಳಿಲ್ಲ:

Pudiyodi There in Kakkabe , Kodagu.

https://kaveridarashin.blogspot.com/2015/11/blog-post_43.html